ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ....!!!!

ಶುಕ್ರವಾರ, ಮಾರ್ಚ್ 25, 2011

ಸಮಯ ಅನ್ನುವ ಬಕರಾ..

ತಪ್ಪು ಮಾಡೋನು ನಾನೇ ಗೆಲುವನರಸೋನು ನಾನೇ
ಕಡೆಗೆ ಸೋಲುವವನು ನಾನೇ ಅದಕೆ ಕಾರಣ ಮಾತ್ರ ಸಮಯ
ಅದಕೆ ನಾನನ್ನುವೆನು ಟೈಮ್ ಸರಿಯಿಲ್ಲ ಮಾರಾಯ
ಸೋತಿದಕ್ಕೊಬ್ಬನ ಮೇಲೆ ಗೂಬೆ ಕೂರಿಸಬೇಕು
ಸಿಕ್ಕಿತಲ್ಲ ಸಮಯ ಅನ್ನೋ ಬಕರಾ...

ಜನ ಬದಲಾಗುವುದು ಮನ ಬದಲಾಗುವುದು
ಯೋಚನೆ ಬದಲಾಗುವುದು ಚಿಂತನೆ ಬದಲಾಗುವುದು
ದೊಡ್ದವರೆನ್ನುತ್ತಾರೆ ಕಾಲ ಬದಲಾಯಿತು ಮಾರಾಯ
ಸಮಯ ತಮ್ಮ ಪಾಡಿಗೆ ತಾನು ಮುನ್ನಡೆಯುತ್ತದೆ
ತಮ್ಮಲ್ಲಿನ ಕುಸಿತಕೆ ಗೂಬೆ ಕೂರಿಸಲು
ಸಿಕ್ಕಿತಲ್ಲ ಸಮಯ ಅನ್ನೋ ಬಕರಾ...

ನಿನ್ನದೇ ಮಕ್ಕಳಿಗೆ ನೀ ಹೇಳಿ ಕೊಡಲಿಲ್ಲ ನೀ ಕಲಿಸಿ ಕೊಡಲಿಲ್ಲ
ದಾರಿ ತಪ್ಪಿಸಿದವ ನೀನು ವಿಷವ ಬಿತ್ತಿದವ ನೀನು
ನಿನ್ನ ಮಕ್ಕಳ ನೋಡಿ ನೀನಂತೀಯ ಕಾಲ ಕೆಟ್ಟು ಹೋಯಿತು ಮಾರಾಯ
ಕೆಡೋಕೆ ಅದೇನು ನೀನು ಹುಳಿ ಹಿಂಡಿದ ಹಾಲೇ ಅಥವಾ ನಿನ್ನ ತಲೆಯೇ ?
ತಾನೇ ಕೆಡಿಸಿದ ಜನ ಮಾನಸಕೆ ಗೂಬೆ ಕೂರಿಸಲು ಬೇಕೊಬ್ಬ ಬಕರಾ
ಅದೋ ಸಿಕ್ಕಿತಲ್ಲ ಸಮಯ ಅನ್ನೋ ಬಕರಾ...

ಬದುಕೆಂಬುದು ಉಳಿವಿನ ಹೋರಾಟ

ಮಾನವ ಬದುಕಿನಿಂದ ಬೇಸತ್ತು
ಬೇರೆಯದೇ ಜೀವವಾಗ ಬಯಸಿದೆ.

ಕಾಡಲ್ಲಿ ನೆಗೆನೆಗೆದು ಉಲ್ಲಾಸದಿ ಓಡುವ
ಜಿಂಕೆಯಾಗಿ ಹುಲ್ಲು ಸೊಪ್ಪು ತಿನ್ದುಕೊಂಡಿದ್ದೆ.
ಒಮ್ಮೆ ಹುಲಿಯು ಹಿಂದೆ ಮತ್ತೊಮ್ಮೆ ಕಿರುಬಗಳ ಮಂದೆ
ತೋಳಗಳ ಊಳಿಡುವ ಸದ್ದು ಕೇಳಿ ಜೀವ ಭಯದಿ ಬೆಚ್ಚಿಬಿದ್ದೆ!

ಇದಕಿಂತ ಬಲಶಾಲಿ ಹುಲಿಯು ಸುಖವಾಗಿರಬೇಕೆಂದು ಕೊಂಡೆ
ಯಾವಾಗಲೂ ಒಂಟಿ ಜೀವನ ತಿಂಗಳುಗಟ್ಟಲೆ ಊಟವಿಲ್ಲ
ಹೆಂಡತಿಗಾಗಿ ಪರರೊಡನೆ ಕಾದಾಟ
ಮುದಿಯಾಡೋದೇ ಬೇಟೆಗೂ ಬಲವಿಲ್ಲ. ಸೊಪ್ಪು ಹೊಟ್ಟೆಯಲಿ ನುರಿಯುವುದಿಲ್ಲ.

ಆಗಸದಿ ಗಾಳಿಯಲಿ ಹಾರಬಯಸಿದೆ ಹಕ್ಕಿಯಂತೆ
ಮಾಂಸಕೆ ಕಾದಿರುವ ಹದ್ದುಗಳ ಭಯ ಮಾನವನ ಬಲೆಯ ಭಯ
ಮಕ್ಕಳ ಸಾಕಲು ಊರೂರು ಅಳೆದು ಗೂಡು ಕಟ್ಟಬೇಕು ಗೂಡಿಗೆ ನುಗ್ಗುವ ಹಾವುಗಳ ಭಯ
ವಾಯುಗುಣ ಪಲ್ಲಟದೊಡನೆ ವಲಸೆಯ ತಲೆನೋವು.

ಗಿಡವಾಗಿ ಮರವಾಗಿ ಪೋದೆಯಾಗಿ ಬದುಕುವೇನು ಸುಖವಾಗಿ
ಬೇರೆ ಮರದ ನೆರಳಲ್ಲಿ ಬೆಳೆಯಲಾಗುವುದಿಲ್ಲ
ಒಮ್ಮೊಮ್ಮೆ ಕಾಲ್ಗಿಚು ಒಮ್ಮೊಮ್ಮೆ ಬರದ ರೊಚ್ಚು
ಕಾಪಿಟ್ಟ ಹಣ್ಣನ್ನು ತಿನ್ನುವ ಹಕ್ಕಿಗಳು ರಕ್ತ ಹೀರಿ ಬದುಕುವ ಪರಾವಲಂಬಿ ಬಳ್ಳಿಗಳು
ನೇಸರನ ಬೆಳಕಿಗಾಗಿ ಪಕ್ಕದ ಮರಗಳೊಡನೆ ಬಡಿದಾಟ

ತಿರುಗಿ ಬಂದೆನು ನನ್ನ ಲೋಕಕೆ ಜೀವನವಲ್ಲ ಸುಲಭ
ಎಲ್ಲರಿಗು ತಮ್ಮ ಬದುಕಿಗಾಗಿ ಕಿತ್ತು ತಿಂದಿದ್ದೆ ಲಾಭ
ಬದುಕಲ್ಲ ಆರಾಮದ ಚದುರಂಗದಾಟ
ಅದೊಂದು ಉಳಿವಿಗಾಗಿ ನಡೆಯುವ ದೊಡ್ಡ ಹೋರಾಟ!