ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ....!!!!

ಶುಕ್ರವಾರ, ಮಾರ್ಚ್ 25, 2011

ಸಮಯ ಅನ್ನುವ ಬಕರಾ..

ತಪ್ಪು ಮಾಡೋನು ನಾನೇ ಗೆಲುವನರಸೋನು ನಾನೇ
ಕಡೆಗೆ ಸೋಲುವವನು ನಾನೇ ಅದಕೆ ಕಾರಣ ಮಾತ್ರ ಸಮಯ
ಅದಕೆ ನಾನನ್ನುವೆನು ಟೈಮ್ ಸರಿಯಿಲ್ಲ ಮಾರಾಯ
ಸೋತಿದಕ್ಕೊಬ್ಬನ ಮೇಲೆ ಗೂಬೆ ಕೂರಿಸಬೇಕು
ಸಿಕ್ಕಿತಲ್ಲ ಸಮಯ ಅನ್ನೋ ಬಕರಾ...

ಜನ ಬದಲಾಗುವುದು ಮನ ಬದಲಾಗುವುದು
ಯೋಚನೆ ಬದಲಾಗುವುದು ಚಿಂತನೆ ಬದಲಾಗುವುದು
ದೊಡ್ದವರೆನ್ನುತ್ತಾರೆ ಕಾಲ ಬದಲಾಯಿತು ಮಾರಾಯ
ಸಮಯ ತಮ್ಮ ಪಾಡಿಗೆ ತಾನು ಮುನ್ನಡೆಯುತ್ತದೆ
ತಮ್ಮಲ್ಲಿನ ಕುಸಿತಕೆ ಗೂಬೆ ಕೂರಿಸಲು
ಸಿಕ್ಕಿತಲ್ಲ ಸಮಯ ಅನ್ನೋ ಬಕರಾ...

ನಿನ್ನದೇ ಮಕ್ಕಳಿಗೆ ನೀ ಹೇಳಿ ಕೊಡಲಿಲ್ಲ ನೀ ಕಲಿಸಿ ಕೊಡಲಿಲ್ಲ
ದಾರಿ ತಪ್ಪಿಸಿದವ ನೀನು ವಿಷವ ಬಿತ್ತಿದವ ನೀನು
ನಿನ್ನ ಮಕ್ಕಳ ನೋಡಿ ನೀನಂತೀಯ ಕಾಲ ಕೆಟ್ಟು ಹೋಯಿತು ಮಾರಾಯ
ಕೆಡೋಕೆ ಅದೇನು ನೀನು ಹುಳಿ ಹಿಂಡಿದ ಹಾಲೇ ಅಥವಾ ನಿನ್ನ ತಲೆಯೇ ?
ತಾನೇ ಕೆಡಿಸಿದ ಜನ ಮಾನಸಕೆ ಗೂಬೆ ಕೂರಿಸಲು ಬೇಕೊಬ್ಬ ಬಕರಾ
ಅದೋ ಸಿಕ್ಕಿತಲ್ಲ ಸಮಯ ಅನ್ನೋ ಬಕರಾ...

1 ಕಾಮೆಂಟ್‌:

AntharangadaMaathugalu ಹೇಳಿದರು...

ಹರ್ಷ...
ನೀವೂ ಸಮಯವೆನ್ನೋ 'ಬಕರ'ನ ಮೇಲೆಯೇ ಗೂಬೆ ಕೂರಿಸುತ್ತಿರಾ? Concept ಇಷ್ಟವಾಯಿತು...!!!


ಶ್ಯಾಮಲ